Wednesday, August 20, 2014

O Manase- 97

O Manase- 97

O Manase - Read on ipad, iphone, smart phone and tablets

ಓದುಗರಿಗೆ ಈ ಸಾರಿ ಸಮಾಧಾನದ್ದೇ ಸಮಾರಾಧನೆ. ಅಷ್ಟೇ ಅಲ್ಲ. ಮಳೆಯ ಹಬ್ಬ ಮತ್ತು ಹಬ್ಬದ ಮಳೆ - ಇವೆರಡೂ ಏಕಕಾಲದಲ್ಲಿ ಸಂಭವಿಸುವ ಶ್ರಾವಣದ ವಿಸ್ಮಯದ ಬಗ್ಗೆ ಪದ್ಯದಂಥ ಗದ್ಯ ಬರೆದಿದ್ದಾರೆ ನೇವಿ. ಟೈಟಲ್ಲೇ ‘ಮಳೆ ಹಬ್ಬ’. ಶಂಕರ್ ನಾಗ್ ಮೀಮ್, ಅಯ್ಯಪ್ಪ ಮೀಮ್, ಅಣ್ಣಾವ್ರ ಮೀಮ್, ಹೀಗೆ ನಮ್ಮ ಮಿದುಳನ್ನು ಏಕಾಏಕಿ ಆವರಿಸುವ ‘ಮೀಮ್ ಎಂಬ ಮಿದುಳ ಹುಳ’ದ ಬಗ್ಗೆ ನಾಗೇಶ್ ಹೆಗಡೆ ಸೊಗಸಾಗಿ ವಿವರಿಸಿದ್ದಾರೆ. ಆಕೆ ಸುಮ್ಮನೇ ತಬ್ಬಿ ಮಲಗುತ್ತಾಳೆ. ಅದಕ್ಕೆ ಗಂಟೆಗೆ ಅರುವತ್ತು ಡಾಲರ್ ಚಾರ್ಜ್ ಮಾಡುತ್ತಾಳೆ. ಯಾರವಳು? ಈ ತಬ್ಬುವಿಕೆಯಿಂದ ನಿಮಗೆ ಸಿಗುವ ಲಾಭವಾದರೂ ಏನು? ರವಿ ಬೆಳಗೆರೆ ವಿವರಿಸುತ್ತಾರೆ. ನೋವೇ ಅನಾರೋಗ್ಯ, ಸಂತೋಷವೇ ಆರೋಗ್ಯ ಎಂಬ ವೇದವಾಕ್ಯದೊಂದಿಗೆ ‘ಚೈತನ್ಯದ ಚಿಲುಮೆ’ ಎಂಬ ಹೊಸ ಅಂಕಣ ಶುರುವಾಗಿದೆ. ಇದು ನಿಮ್ಮ ಮನಸ್ಸಿಗೊಂದು ಟಾನಿಕ್ ಆಗಬಹುದು. ವೆಂಕಟೇಶ್ವರ ಸುಪ್ರಭಾತದಲ್ಲಿ ‘ಕಮಲಾಕುಚ’ ಎಂಬ ಪದ ಯಾಕೆ ಬಂತು? ‘ಆಚಾರ ವಿಚಾರ’ ಓದಿರಿ. ಫೇಸ್ ಬುಕ್ಕಲ್ಲಿ ನಡೆಯುತ್ತಿರುವ ಲೆಫ್ಟ್ ರೈಟು ಎಂಬ ಫೈಟನ್ನು ಯಾರೂ ಗೆಲ್ಲದ ಧರ್ಮಯುದ್ಧ ಎಂದು ಬಣ್ಣಿಸುತ್ತಾರೆ ಮಹಾಶ್ವೇತ. ಕೇವಲ ಹದಿನಾಲ್ಕು ಸಾವಿರಕ್ಕೆ ಒಂದು ಅದ್ಭುತ ಮೊಬೈಲ್ ಸಿಗುತ್ತದೆ ಗೊತ್ತಾ? ವಾಟ್ಸ್ ಅಪ್ ಅಂಕಣ ನೋಡಿ. ಇದರ ಜೊತೆ ನಿಮ್ಮ ಮೆಚ್ಚಿನ ಇತರೇ ಅಂಕಣಗಳೂ ‘ಓ ಮನಸೇ’ಯನ್ನು ಅಲಂಕರಿಸಿವೆ. ಓ ಮನಸೇ ಓದಿ ನಿಮ್ಮ ಮನಸ್ಸು ಅರಳಲಿ, ಜ್ಞಾನದಿಗಂತ ವಿಸ್ತರಿಸಲಿ. ಪೂರ್ತಿ ಸಂಚಿಕೆಯ ಹೈಲೈಟ್ಶ್ ನೋಡಲು ಕ್ಲಿಕ್ ಮಾಡಿ... https://www.youtube.com/watch?v=muwCZRQEhhU

No comments:

Post a Comment